Friday, April 24, 2009

ಪುಸ್ತಕ ಬಿಡುಗಡೆಯ ಮಾತು...


ದಿನಾಂಕ 27 ರಂದು ಚಾಂದ್ರ ಯುಗಾದಿಯ ದಿನ ಸಂಜೆ 5 ಘಂಟೆಗೆ ಕುಂದಾಪುರದ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನನ್ನ ಚೊಚ್ಚಲ ಕೃತಿಗಳಾದ "ಒಂದಾನೊಂದು ಕಾಲದಲ್ಲಿ" ಮತ್ತು "ಬೆಳಕು ನೀಡುವ ಕಥೆಗಳು" ಎಂಬ ಪುಸ್ತಕಗಳು ಬಿಡುಗಡೆ ಸಂಪ್ರದಾಯದ ಬೆಳಕು ಕಂಡವು


 ಖ್ಯಾತ ಸಾಹಿತಿ ಶ್ರೀಮತಿ ವೈದೇಹಿವರು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, "ಹಲವು ವ್ಯಕ್ತಿತ್ವದ ಆಕರ್ಷಕ ಸಂಗಮವಾದ ನಾರಾಯಣಿ ದಾಮೋದರ್ ಅವರ ಇನ್ನೊಂದು ಪ್ರತಿಭೆಯು ಹೀಗೆ ಪುಸ್ತಕಗಳಾಗಿ ಮೂಡಿ ಬಂದಿರುವುದು ಒಬ್ಬ ಲೇಖಕಿಯಾಗಿ ಮತ್ತು ಆಕೆಯ ಚಿಕ್ಕಮ್ಮನಾಗಿ ನನಗೆ ತುಂಬಾ ಹೆಮ್ಮೆಯೆನಿಸಿದೆ. ಇದು ಮಕ್ಕಳಿಗೆ ಮಾತ್ರವಲ್ಲ ನಾವೆಲ್ಲರೂ ಓದಬೇಕಾದ ಪುಸ್ತಕಗಳು " ಎಂದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಅಂಬಾತನಯ ಮುದ್ರಾಡಿಯವರು ಮಾತನಾಡುತ್ತಾ " ಎರಡೂ ಪುಸ್ತಕಗಳ ಭಾಷೆಯು ಅತೀ ಸುಂದರವಾಗಿದೆ. ಇಲ್ಲಿರುವುದು ಕಥನ ಕಾವ್ಯ " ಎಂದರು. ಉದಯೋನ್ಮುಖ ಲೇಖಕ ಶ್ರೀ ನವಿಲೂರು ಪ್ರಕಾಶ್ ಅವರು ಉತ್ಸಾಹದಿಂದ ಕಾರ್ಯಕ್ರಮವನ್ನು ನಿರೂಪಿಸಿ ಸೂತ್ರಧಾರಿಯಾದರು. ನನ್ನ ಬಾಲ್ಯದ ಶಾಲಾ ಗುರುಗಳು, ಬಂಧುಗಳು, ಆತ್ಮೀಯರು, ಸಾಹಿತ್ಯಾಸಕ್ತರು, ಆಹ್ವಾನ ತಲುಪಿ ಬಂದವರು, ಕೇವಲ ಸುದ್ದಿ ಕೇಳಿಯೇ ಬಂದವರು ...ಎಲ್ಲರೂ ಅಭಿಮಾನದಿಂದ ಸೇರಿ ಸಮಾರಂಭವು ಕಳೆಗಟ್ಟುವಂತೆ ಮಾಡಿದರು. ಜೊತೆಲ್ಲಿದ್ದ ಹರಸಿ ಕೊಂಡಾಡಿದರು. ಅಭಿಮಾನದ ಮಹಾಪೂರದಲ್ಲಿ ತೇಲುವಂತೆ ಮಾಡಿದ ನನ್ನೂರಿನ ಬಂಧುಗಳನ್ನು ನಾನು ಹೇಗೆ ಸ್ಮರಿಸಿಕೊಂಡರೂ ಅದು ಕಡಿಮೆಯೇ ಿಡುಗೆಗೊಂಡ ಪುಸ್ತಕಗಳನ್ನು ಅಂದಕೊಂಡುಹೋದ ಅವರೆಲ್ಲರೂ - ಓದಿ, ಅನಂತರ ವ್ಯಕ್ತಪಡಿಸುವ ಅನ್ನಿಸಿಕೆಯನ್ನು ನಾನು ಕಾತರದಿಂದ ಕಾಯುತ್ತಿದ್ದೇನೆ. 


ಎಪ್ರಿಲ್ ೧೨ನೇ ತಾರೀಕು ಭಾನುವಾರ, ಬೆಂಗಳೂರಿನ ಬಸವನಗುಡಿಯ Indian Institute of World culture ಸಭಾ ಭವನದಲ್ಲಿ - ಪ್ರಕಾಶಕರಾದ ಅಂಕಿತ ಪುಸ್ತಕ ದವ ಆಶ್ರಯದಲ್ಲಿ ಪುಸ್ತಕಗಳ ಬಿಡುಗಡೆಯ ಸಮಾರಂಭ ನಡೆಯಿತು. ಅದೇ ದಿ ಶ್ರೀ  ಜಿ. ಎನ್. ರಂಗನಾಥ ರಾಯರ "ಕಾಫ್ಕಾ ಕಥೆಗಳು", ಗಿರಿಮನೆ ಶ್ಯಾಮರಾಯರ "ಮಕ್ಕಳನ್ನು ಬೆಳೆಸುವುದು ಹೇಗೆ"- ಎಂಬ ಪುಸ್ತಕಗಳೂ ಬಿಡುಗಡೆಗೊಂಡವು. ಖ್ಯಾತ ವಿಮರ್ಶಕರಾದ ಪ್ರೊ ಸಿ. ಎನ್. ರಾಮಚಂದ್ರನ್ ಹಾಗೂ ವೈದ್ಯಕೀಯ ಬರಹಗಾರರಾದ ಡಾ. ನಾ. ಸೋಮೇಶ್ವರ ಅವರು ಎಲ್ಲ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.
ಕುಂದಾಪುರದ ಬಿಡುಗಡೆಯ ಸಮಾರಂಭವು ಮನೆಯ ಮಗುವನ್ನು ಮುದ್ದಾಡಿದಂತಹ ಪ್ರೀತ್ಯಭಿಮಾನದ ಭಾವವನ್ನು ಮೂಡಿಸಿದ್ದರೆ, ಬೆಂಗಳೂರಿನ ಸಮಾರಂಭವು ವಿಶಿಷ್ಟ ವಾಸ್ತವದ ಭಿನ್ನ ಅನುಭವವನ್ನ ನೀಡಿತ್ತ.
 
ಸಾಹಿತ್ಯ ವಲಯದೊಳಕ್ಕೆ ಅಧಿಕೃತವಾಗಿ ಒಂದೇ ಹೆಜ್ಜೆ ಇರಿಸಿರುವ ನನಗೆ ಅಲ್ಲಿನ ಪರ - ಅಪರಗಳ ಸ್ಥೂಲ ದರ್ಶನವೂ ಆಯಿತು. ಒಂದಿಷ್ಟು ಅಯೋಮಯ. ಕೊಳದ ಮೀನನ್ನು ಎತ್ತಿ ಸಮುದ್ರದಲ್ಲಿ ಬಿಟ್ಟಂತೆ.


ಪ್ರಕಾಶಕರಾದ ಅಂಕಿತದ ಶ್ರೀ ಪ್ರಕಾಶ್ ಕಂಬತ್ತಳ್ಳಿ ಅವರು ತುಂಬ ಶಿಸ್ತಿನಿಂದ ಕಾರ್ಯಕ್ರಮ ನಿರ್ವಹಿಸಿದರು. ಕಂಬತ್ತಳ್ಳಿಯವರ ಪತ್ನಿ ಶ್ರೀಮತಿ ಪ್ರಭಾ ಅವರು ವೇದಿಕೆಯ ಶೃಂಗಾರದಿಂದ ತೊಡಗಿ, ತೆರೆಯ ಹಿಂದಿನ ಎಲ್ಲ ಸಿದ್ಧತೆಗಳಿಗೂ ಹೆಗಲು ಕೊಟ್ಟಿದ್ದರು. ಅಂಕಿತ ಪುಸ್ತಕದ ಎಲ್ಲ ಸದಸ್ಯರೂ ಕಾರ್ಯಕ್ರಮದಲ್ಲಿ ಪ್ರತ್ಯಕ್ಷ ಅಥವ ಪರೋಕ್ಷವಾಗಿ ಭಾಗವಹಿಸಿದ್ದು - ಪ್ರಕಾಶ್ ಕಂಬತ್ತಳ್ಳಿಯವರ ಸಂಘಟನಾ ಶಕ್ತಿಗೆ ದ್ಯೋತಕದಂತಿತ್ತು. ನನ್ನ ಪುಸ್ತಕಗಳಿಗೆ ಸುಂದರವಾದ ಚಿತ್ರನ್ನ ಬರೆದ ಶ್ರಚಿತ್ರ ಸೋಮ ಅವರನ್ನು ಮುಖತಃ ಕಂಡು ಮಾತಾಡಿ, ಮೆಚ್ಚುಗೆ ಸೂಚಿಸುವ ಅವಕಾಶವೂ ಸಿಕ್ಕಿತು. ವೇದ, ಉಪನಿಷತ್ತು, ಇತಿಹಾಸ, ಪುರಾಣಗಳಿಂದ ಆಯ್ದ ಕಥಾ ಸಂಕಲನವಾದ "ಒಂದಾನೊಂದು ಕಾಲದಲ್ಲಿ" ಮತ್ತು "ಬೆಳಕು ನೀಡುವ ಕಥೆಗಳು"- ಎಂಬನ್ನುಸ್ತನ್ನ ಬಿಡುಗಡೆ ಮಾಡಿ ಮಾತನಾಡುತ್ತ ಡಾ. ನಾ. ಸೋಮೇಶ್ವರ ಅವರು  "ಮಕ್ಕಳಿಗೆ ಸಾಹಿತ್ಯದ ಯಾವುದೇ ಹಿನ್ನೆಲೆ ಇಲ್ಲದೆ ಹೋದರೆ ಕಥೆಗಳು ಅರ್ಥವಾಗುವುದು ಕಷ್ಟ" ಎಂದು ತಮ್ಮಿಪ್ರಾಯನ್ನು ವ್ಯಕ್ತಿಸಿದ; ಹಿರಿಯರು ಜೊತೆಯಲ್ಲಿ ಕೂತು ಮಕ್ಕಳಿಗೆ ಹೇಳಬಹುದಾದ ಕಥೆಗಳಿವು - ಎಂದೂ ಸೇರಿಸಿದರು. ಅದು ವಾಸ್ತವವೂ ಹೌದು; ನನ್ನ ಉದ್ದೇಶವೂ ಅದೇ ಆಗಿತ್ತು. ಆದರೆ...ಈ ವಾಸ್ತನ್ನು ಒಪ್ಪುವಾಗೂ ನನ್ನೊಳೆ ತಾಕಾಟಿತ್ತು. ನಮ್ಮ  ೇದ, ಪುರಾಣ, ಭಾರತ, ರಾಮಾಯಣದ ಏನೇನೂ ಕಲ್ಪನೆಯಿರದ ವಿದೇಶೀಯರೂ ಕುತೂಹಲದಿಂದ ಭಾರತಕ್ಕೆ ಬಂದು, ನೋಡಿ, ಕೇಳಿ, ಅಭ್ಯಿಸಿ ತಿಳಿಯುವ ಪ್ರಯತ್ನ ಮಾಡುತ್ತಿರುವ ದಿನಗಳಲ್ಲಿ, ಹನ್ನೆರಡು ವರ್ಷ ದಾಟಿದ ಾರೀಯೆನ್ನುವ ಮಕ್ಕಳಿಗೂ ನಮ್ಮದೇ ನೆಲದ ನಮ್ಮ ಕಥೆಗಳು ಕಬ್ಬಿಣದ ಕಡಲೆಯಾಗುತ್ತದೆಯೆಂದರೆ ಇದಕ್ಕಿಂತ ದುರಂತ ಬೇಕೇ? ಕನ್ನಾಡಿನಕ್ಕಿ - ಕನ್ನು ಕಬ್ಬಿಣೆಯಾಗುತ್ತಿದ್ದೆ ಅದಕ್ಕೆ ಕಾರ ಏನು ? ಎಂದು ನನಗೆ ಅನಿಸಿದ್ದೂ ಹೌದು. ಅದೆಲ್ಲಿಯದೋ Harry potter, Cindrella, ಕಾಫ್ಕಾಗಳು ನಮ್ಮ ಮಕ್ಕಳನ್ನು - ುಣಿಯುವಷ್ಟಆಕರ್ಷಿಸುವುದಾದರೆ, ನಮ್ಮ ಸ್ವಂತ ಕಥೆಗಳು ಏಕೆ ರುಚಿಸುವುದಿಲ್ಲ? ೆಟ್ಟಿದೆಲಏಕೆ ಪರಕೀಯವಾಗುತ್ತಿದೆ ? ಇದ ಅಭಿರುಚಿ ಹೀನತೆಯೇ ? ಅಭಿಮಾನ ಶೂನ್ಯತೆಯೇ ? ಇಂದಿನ ಒಡು ಕುಟುಂಬಿರಿಯೋಗಾಡಿತಿಣಾಮೆ ? ಹಿತ್ತಲ ಗಿಡ ಮದ್ದಲ್ಲ ಎಂಬ ತಿರಸ್ಕಾರವೇ ? ಗುಲಾಮತನದ ಪ್ರತೀಕವೇ ? ೊಡ್ಡಸ್ತಿಕೆಯೋರಿಕೆಯೆ ? ಇಂದಿನ ಶಿಕ್ಷಣ ಕ್ರಮದ ಫಲವೇ ?  ನಮ್ಮಕ್ಕಿಗೆ ಸಾಹಿತ್ಯ ಪ್ರೀತಿಯು ಬತ್ತಿಹೋಗುವಂತೆ ಮಾಡಿದ್ದೆ ಅಕ್ಕೆ ಯಾರು ಹೊಣೆ ?

ಇಷ್ಟೆಲ್ಲ ಪ್ರಶ್ನೆಗಳನ್ನು ಹೊತ್ತು ಬೆಂಗಳೂರಿನಿಂದ ಮಂಗಳೂರಿಗೆ ಬಂದಿದ್ದೇನೆ. ುಸ್ತುರಿತು 
ಿದ ಎಲ್ಲ ಅಭಿಪ್ರಾಯಕ್ಕಾಗಿ ನಾನು ಕಾಯುತ್ತಿದ್ದೇನ. 

ನಮ್ಮ ಮಕ್ಕಳು ಈಜು ಕೊಳದಲ್ಲಿ ಮಾತ್ರ ಈಜಿದರೆ ಸಾಲದು. ವಿಶಾಲವಾದ ವಾರಿಧಿಯಲ್ಲೂ ಈಜಿ ಜಯಿಸಿ ಬರುವಂತಾಗಬೇಕು. ಇದು ನನ್ನ ಆಸೆ. ಕಥೆಯೊಂದನ್ನು ಓದಿ, ಕೇಳಿದ ನಂತರ ಮಕ್ಕಳ ಮನಸ್ಸಿನಲ್ಲಿ ಒಂದಷ್ಟು ಪ್ರಶ್ನೆಗಳು ಹುಟ್ಟಬೇಕು. ಪ್ರಶ್ನೆಗಳಿಗೆ ಉತ್ತರದ ಹುಡುಕಾಟದಲ್ಲಿ ಸ್ವಪ್ರಯತ್ನದಿಂದಲೇ ಅವ ಜ್ಞಾನಾರ್ಜನೆ ನಡೆಯಬೇಕು. ಹಂತದಲ್ಲಿ ಸಾಗಿ ಅವ ಇನ್ನಷ್ಟು ಪುಸ್ತಕಗನ್ನ ಓದಬೇಕು. ಅಂತಹ ಹುಡುಕಾಟಕ್ಕೆ - "ಓದುವ ಆಟ" ಕ್ಕಇಂತ ಪುಸ್ತಕಗಳು ಪ್ರೇರಣೆ ನೀಡುವಂತಾದರೆ ಅದು ಸಾರ್ಥಕ್ಯವೆಂದು ನಾನು ಅಂದುಕೊಂಡಿದ್ದೇನೆ.

ನಿಮಗೆ ಪುಸ್ತಕಗಳು ಬೇಕಾದರೆ ವಿಳಾಸಕ್ಕೆ ಬರೆಯಿರಿ : ನಾರಾಯಣಿ ದಾಮೋದರ್
4-80\2, ಮಹಾತ್ಮ ನಗರ ಬಡಾವಣೆ, ಬೊಂದೆಲ್, ಮಂಗಳೂರು-575015

ಅಥವ

ಅಂಕಿತ ಪುಸ್ತಕ, 53, ಶ್ಯಾಮ್ ಸಿಂಗ್ ಕೊಂಪ್ಲೆಕ್ಸ್,
ಗಾಂಧೀ ಬಜಾರ್ ಮುಖ್ಯ ರಸ್ತೆ, ಬಸವನಗುಡಿ,
ಬೆಂಗಳೂರು - 560004

Ph:080 2661 7100
     080 2661 7755

ನೀವೂ ಓದಿ, ನಿಮ್ಮ ಸ್ನೇಹಿತರಿಗೂ ಹೇಳಿ.  
ಹಾಗೇ....ಮರೆಯದೆ - ಪುಸ್ತಕಗಳ ಕುರಿತ ನಿಮ್ಮ ಅಭಿಪ್ರಾಯವನ್ನೂ ತಿಳಿಸಿ.

(ಅಂದು ಬಿಡುಗೆಯಂತ - ಪುಸ್ತಕಗಳನ್ನು ಕುರಿತು ಮಾತನಾಡಿದ್ದ ಶ್ರೀ ನಾ. ಸೋಮೇಶ್ವರ ಅವರಿಗೆ ಅದೇ ವಾರಲ್ಲಿ ನಾನು ಬರೆದ ಪತ್ರ.)


ಶ್ರೀ ನಾ ಸೋಮೇಶ್ವರ ಅವರಿಗೆ -ಹಾರ್ದಿಕ ನಮಸ್ಕಾರ .
ನಿಮ್ಮ ಬ್ಲಾಗಿನಲ್ಲಿ ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಹೊಂದಿದ "ಯಕ್ಷ ಪ್ರಶ್ನೆ" ೀರ್ಿಕೆಯನ್ನ- ನೋಡಿದೆ. ಅದರಲ್ಲಿ ನನ್ನ ಪುಸ್ತಕಗಳ ಬಗೆಗೆ (ಬೆಳಕು ನೀಡುವ ಕಥೆಗಳು ಮತ್ತು ಒಂದಾನೊಂದು ಕಾಲದಲ್ಲಿ) - ನಿಮ್ಮ ವಿಸ್ತ್ರತವಾದ ಅಭಿಪ್ರಾಯಗಳನ್ನೂ ಓದಿದೆ. "ಮಕ್ಕಳ ಗಂಟಲಲ್ಲಿ ಈ ಪುಸ್ತಕವು ಇಳಿಯುವುದು ಕಷ್ಟ" ಎಂದು ಪುಸ್ತಕ ಬಿಡುಗಡೆಯ ದಿನ ನೀವು ಹೇಳಿದ ಮಾತುಗಳೇ - ನಿಮ್ಮ ಬ್ಲಾಗಿನಲ್ಲಿ ಅಕ್ಷರ ರೂಪದಲ್ಲಿ ಇದ್ದವು - ಅನ್ನಿಸಿತು. ನಿಮ್ಮ ಅಮೂಲ್ಯ ಸಮಯವನ್ನು ಹೀಗೆ ನನಗಾಗಿ (ನನ್ನ ಪುಸ್ತಕಗಳಿಗಾಗಿ ) ವ್ಯಯಿಸಿದ್ದಕ್ಕೆ ಧನ್ಯವಾದಗಳು.
  
ಅಂದು ಏಪ್ರಿಲ್ 12 ರಂದು ಬೆಂಗಳೂರಿನಿಂದ ಮಂಗಳೂರಿಗೆ ಹಿಂತಿರುಗಿದ ಮೇಲೆ ನನ್ನ ಬ್ಲಾಗ್ನಲ್ಲಿ (krishnachaitanyaa.blogspot.com ) ಪುಸ್ತಕ ಬಿಡುಗಡೆಯ ದಿನದ ನನ್ನ ಅನುಭವ ಹಾಗೂ ಅನ್ನಿಸಿಕೆಯನ್ನ ದಾಖಲಿಸಿದ್ದೇನೆ. ಪುರಸೊತ್ತಾದರೆ ನೋಡಿ.

ಕನ್ನಡ - ನಮ್ಮ ಸ್ವಂತದ್ದು . ಭಾರತ ದೇಶವೂ ಸ್ವಂತದ್ದು. ಇಲ್ಲಿನ ಸಂಸ್ಕೃತಿ, ಇತಿಹಾಸ, ಪುರಾಣವೂ ನಮ್ಮ ಸ್ವಂತದ್ದೇ.
ಆದ್ದರಿಂದಲೇ - ಇವೆಲ್ಲವೂ ನಮಗೆ ಪರಿಚಿತ ಆಗಿರಲೇಬೇಕು. ಈಗೀಗ ಉದ್ದಿತಾಗಿ ಅಪಿಚಿತಾಗಿಸಿಕೊಳ್ಳುವ ಾವೀನ್ಯ ಲ್ಲಿ ಪರಿಚಿತರನ್ನೂ ಪರಿಚಯಿಸಬೇಕಾಗಿ ಬರುತ್ತಿದೆ ಎಂದರೆ - ಅದು ದುರಂತವಲ್ಲವೇ ?

ಸಾಮಾನ್ಯವಾಗಿ, ಯಾವುದೇ ಮಕ್ಕಳು ಪರಿಚಿತರನ್ನು ನೋಡಿದರೆ ಅಳುವುದಿಲ್ಲ. ಆದರೆ ಅಪರಿಚಿತರಿಂದ ದೂರ ಓಡುವುದು ಸಾಮಾನ್ಯ. ಆದರೆ ಈಗ, ನಾವು ಹಿರಿಯರು - ಮಕ್ಕಳನ್ನು ಎರ್ರಾಬಿರ್ರಿಯಾಗಿ ಬೆಳೆಸಿ, ಸ್ವಂತತ್ತು ಪಿಯಂತ ಒಟ್ಟಾರೆ ಗೊಂದಲಕ್ಕೆ ಅವನ್ನದೂಡಿದ್ದೇವೆ ಅಂತ ಅನ್ನಿಸುವುದಿಲ್ಲವೇ ? ಈಗ ನಮ್ಮ ವಿಳಾಸ ನಮಗೊತ್ತಿಲ್ಲದಂತ ಸ್ಥಿತಿ ಬಂಂತಿದೆ. ಆದ್ದಿಂದಪರಿಚಿತರನ್ನೂ ಪರಿಚಯಿಸಬೇಕಾದ ಸಂಕಟವೂ ಎದುರಾಗಿದೆ.

ಬಿಡಿ. ನನ್ನುಮುಲನ್ನು ಹಿರಿಯಾದಿಮ್ಮೊಂದಿಗೆ ಮುಕ್ತಾಗಿ ಂಚಿಕೊಂಡಿದ್ದೇನ;ಷ್ಟೆ. ಮನೆಯ ಹಿರಿಯರುಮ್ಮ ಮಕ್ಕಳನ್ನು ಜೊತೆಯಲ್ಲಿ ಕೂಡಿಸಿಕೊಂಡು ಇಂತಹ ಕಥೆಗಳನ್ನು ಹೇಳುತ್ತಿದ್ದರೆ ...ಅಪರಿಚಿತ ಪಾತ್ರ - ಪ್ರಸಂಗಗಳು ಪರಿಚಿತವಾಗಲು ಎಷ್ಟು ಕಾಲ ಬೇಕು ? ... ಅಲ್ಲವೇ ?

ನಾನು ಆಶಾವಾದಿ . ನೀವೂ ಹಾಗೇ - ಅಂದುಕೊಂಡಿದ್ದೇನೆ. ಿಮ್ಮ ಥಟ್ಟಂತ ಹೇಳಿ - ಕಾರ್ಯಕ್ರಮದ ನಿರಂತರ ನೋಡುಗಳು ನಾನು. ಇನ್ನು ಮುಂದೆ - ನಿಮ್ಮ ಬ್ಲಾಗಿನ "ಯಕ್ಷ ಪ್ರಶ್ನೆ" ಗಳ ಅನುಯಾಯಿ. ಒಬ್ಬ ವೈದ್ಯರಾಗಿದ್ದುಕೊಂಡು ಕನ್ನಡಕ್ಕಾಗಿ ನೀವು ಮಾಡುತ್ತಿರುವ ಕೆಲಸವು ಸಣ್ಣದೇನಲ್ಲ. .

ವಿಶ್ವಾಸವಿರಲಿ .
ನಾರಾಯಣೀ ದಾಮೋದರ್