Sunday, March 15, 2009

ನನ್ನ ಹೊಸ ಪುಸ್ತಕ




 

ಮಕ್ಕಳ ಕಥಾ ಮಾಲಿಕೆ - ಒಂದಾನೊಂದು ಕಾಲದಲ್ಲಿ  ಹಾಗೂ ಬೆಳಕು ನೀಡುವ ಕಥೆಗಳು ಎಂಬ ಹೊತ್ತಗೆಗಳು ಮಾರ್ಚ್ 27 ಕ್ಕೆ (27-03-2009) ಕುಂದಾಪುರದ ನಾರಾಯಣ ಗುರು ಸಂಕೀರ್ಣದಲ್ಲಿ ಸಂಜೆ 4 ಘಂಟೆಗೆ ಬಿಡುಗಡೆಯಾಗಲಿವೆ. ಖ್ಯಾತ ಲೇಖಕಿ ಶ್ರೀಮತಿ ವೈದೇಹಿಯವರು ಪುಸ್ತಕಗಳ ಬಿಡುಗಡೆ ಮಾಡಲಿದ್ದಾರೆ ಹಾಗೂ ಉಡುಪಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಬಾತನಯ ಮುದ್ರಾಡಿಯವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಮಾರಂಭಕ್ಕೆ ಸರ್ವರಿಗೂ ಸ್ವಾಗತ.

ಮುದ್ದು ಮಕ್ಕಳಿಗಾಗಿ ಬರೆದಿರುವ ಈ ಕಥಾ ಮಾಲಿಕೆಯು ಅರಿವು ಆನಂದಗಳ ಬೆಳಕೀವ- ವೇದ, ಉಪನಿಷತ್ತು, ಇತಿಹಾಸ, ಪುರಾಣಗಳಿಂದ ಆಯ್ದ ಸುಂದರ ಕಥಾನಕಗಳ ಸಂಚಯ.
ಪ್ರಕಾಶಕರು - ಅಂಕಿತ ಪುಸ್ತಕ, ಬೆಂಗಳೂರು.

ಮಾರ್ಚ್ 27 - ಯುಗಾದಿಯ ದಿನದಂದು ಬಿಡುಗಡೆಯಾಗಲಿರುವ ಈ ಪುಸ್ತಕಗಳು ಕರ್ಣಾಟಕದ ಎಲ್ಲಾ ಪುಸ್ತಕ ಮಳಿಗೆಗಳಲ್ಲಿ [ಸಪ್ನಾ ಮತ್ತು ನವಕರ್ನಾಟಕ ಪುಸ್ತಕ ಮಳಿಗೆ] ಮಾರಾಟಕ್ಕೆ ಲಭ್ಯವಿರುತ್ತವೆ. ಬೆಂಗಳೂರಿನ ಓದುಗರು ಅಂಕಿತ ಪುಸ್ತಕ, 53,
ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಬಸವನಗುಡಿ, ಬೆಂಗಳೂರು ಇವರನ್ನು ಸಂಪರ್ಕಿಸಬಹುದು.